Thursday, June 30, 2011

ಹೊರತಳ್ಳದಿರಿ





ಏಕಾಂತದಲ್ಲಿ ಮೆತ್ತನೆಯ ಹಾಸಿಗೆಯ ಮೇಲೆ ಮಲಗಿ ದಿಂಬಿಗೊರಗಿ ತುಸು ನಾಚುತ್ತಾ, ಕಂಗಳಲ್ಲಿ ಮುಂದಿನ ಬದುಕಿನ ಸವಿಗನಸನ್ನು ಕಾಣುತ್ತ ಕುಳಿತಿದ್ದ  ಹುಡುಗಿಗೆ  ಒಂದೆಡೆಗೆ ಮನಸು ಬೇಡವೆಂದರೆ ಇನ್ನೊಂದೆಡೆ ಬೇಕು ಅನಿಸುತ್ತಿತ್ತು. ಮನೆಯಲ್ಲಿ ಮದುವೆಯ ವಿಷಯ ತೆಗೆದಾಗ  ಸಹಜವಾಗಿಯೇ ಅವಳಲ್ಲಿ ಆ ಕನಸು, ಆತಂಕ, ನಾಚಿಕೆ ಎಲ್ಲವೂ ಮೂಡಿತು. ಗಂಡಿನ ಕಡೇಯವರು ಬಂದಾಯಿತು ಮಾತು ಕತೆ ಶುರುವಾಯಿತು , ಅಲ್ಲಿಗೆ ಕೊನೆಯಾಗದೆ ನೋಡಿದ ಗಂಡುಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಹುಡುಗಿಯ ವಯಸ್ಸು ಇನ್ನೂ ಚಿಕ್ಕದಾದರೂ , ವಿದ್ಯೆ , ಬುದ್ಧಿ , ಸೌಂದರ್ಯ ಇದ್ದರೂ ತಂದೆ ತಾಯಿಗಳಿಗೆ ಅವಳ ಮದುವೆಯೇ  ದೊಡ್ಡ ಚಿಂತೆಯಾಯಿತು.

ಮೇಲಿನ ಘಟನೆ ಕೇವಲ ಒಂದು ನಿದರ್ಶನ ಅಷ್ಟೇ, ಎಲ್ಲರ ಮನೆಯ ದೋಸೆಯೂ ತೂತೆ ಎನ್ನುವಂತೆ ಇದು ಮನೆ ಮನೆಯ ಕಥೆ, ಈಗ  ಒಮ್ಮೆ ಕನಸ ಕಟ್ಟಿದ ಹುಡುಗಿ ದೃಷ್ಟಿಯಿಂದ ನೋಡಿ. ಮದುವೆ ಬದುಕಿಗೆ ಮುಖ್ಯ ಹಾಗೂ ಅವಶ್ಯಕ ನಿಜ, ಜವಾಬ್ದಾರಿಯಿಂದ  ಪಾಲಕರು ಚಿಂತಿಸುವುದು ಸರಿಯೇ, ಹೌದು. ಆದರೆ ಮದುವೆ ಎನ್ನುವುದು ಅವರು ಜೀವನದಲ್ಲಿ ಸುಖವಾಗಿ ಇರಲಿ ತಮ್ಮ ಜೀವನ ಸಂಗಾತಿ ಜೊತೆ ಎನ್ನುವ ಉದ್ದೇಶದಿಂದ ಹುಡುಕುವ ಬದಲು, ಮಗಳು  ಒಂದು ಜವಾಬ್ದಾರಿ ಅವಳ ಮದುವೆ ಒಂದು ಆದರೆ ಸಾಕು ಎನ್ನುವ ರೀತಿಯಲ್ಲಿ ಯೋಚಿಸಿದರೆ ಆ ಮಗಳು ಇನ್ನಾರಿಗೆ ತಾನೇ ಹತ್ತಿರ ವಾಗಲು ಸಾಧ್ಯ. ಯಾವುದೇ ಯುಗದಲ್ಲಿ , ಯಾವುದೇ ಕ್ಷೇತ್ರದಲ್ಲಿ ಎಂತಹ ಉತ್ತಮ ಸ್ಥಾನದಲ್ಲಿದ್ದರೂ  ಅವಳಿಗೆ ತಾನೊಂದು ಮನೆಗೆ ಭಾರ ಎನ್ನುವ ಭಾವನೆ ಖಂಡಿತ ಮೂಡುತ್ತದೆ.

ಏಕೆ ಮದುವೆಯೇ ಮಗಳಿಗೆ ಮೂಲ ಗುರಿಯಾಗಬೇಕೆ? ಮದುವೆ ಆಗಿಲ್ಲವೆಂದರೆ ಚಿಂತೆಯನ್ನು ಬದಿಗಿಟ್ಟು ಮಗಳು ಕೆಲಸದಲ್ಲಾದರು ಸಂತೋಷವನ್ನು ಕಾಣಲಿ, ಆತ್ಮ ವಿಶ್ವಾಸವನ್ನು ಬೆಳೆಸಿ ಕೊಳ್ಳಲಿ ಎಂದು ಹುರಿದುಂಬಿಸುವ ಬದಲು ಮದುವೆ ಆಗುವ ತನಕ ಮನೆಯಲ್ಲಿ ಕೂತು ಏನು ಮಾಡುವುದು ಅಂತ  ಕೆಲಸಕ್ಕೆ ಕಳಿಸ್ತಾ ಇದ್ದೇವೆ ಎನ್ನುವ ಭಾವನೆಯನ್ನೇ   ಹೊಂದಿರಬೇಕೆ?. ಎಂತಹುದಕ್ಕೂ ತಲೆ ಕೆಡಿಸಿ ಕೊಳ್ಳದವರು ಕೂಡ ಈ ಮದುವೆ ಎನ್ನುವ ವಿಷಯ ಬಂದೊಡನೆಯೇ ಮನೆಯವರೆಲ್ಲಾ ಸೇರಿಕೊಂಡು ಆ ಹುಡುಗಿಯ ಮನಸನ್ನು ನೂರು ಹೋಳು ಮಾಡುತ್ತಾರೆ. 

ಹುಟ್ಟಿನಿಂದ ಅಷ್ಟೊಂದು ಪ್ರೀತಿ ತೋರಿಸುವ ಮನೆಯವರು , ದೊಡ್ದವರಾದೊಡನೆ ಅದೇ ಪ್ರೀತಿಯಿಂದ ಬೇರೆ ಕಳಿಸುವ ಬದಲು ದಬ್ಬುವುದಾದರೂ ಏತಕ್ಕೆ? ಜನರಿಗೆ ಹೆದರಿಯೇ? ಹಾಗಾದರೆ ಮಗಳ ಮನಸಿಗೆ ಆಗುವ ಪರಿಣಾಮಕ್ಕಿಂತ ಸುಖದಲ್ಲಿ ಬಂದು ಕಷ್ಟದಲ್ಲಿ ಹಿಂದಾಡುವ ಜನರೇ ಹೆಚ್ಚೇ ? ಇದಕ್ಕೆನು ಉತ್ತರ.. ಕೇವಲ ದೀರ್ಘ ಮೌನ ಅಲ್ಲವೇ  !!! ಪಟ್ಟಣದಲ್ಲಿ ಪರಿಸ್ಥಿತಿ ಬದಲಾಗುತ್ತಿರಬಹುದು ಆದರೆ ಇನ್ನೂ ಹಲವರ ಮನಸ್ಥಿತಿ ಇನ್ನೂ ಹಾಗೆಯೇ ಉಳಿದು ಹೋಗಿದೆ. 

ಅದು ಹೋಗುವ ತನಕ ಅಂತಹ ಸ್ಥಿತಿಯ ಹುಡುಗಿಯರು ಎಂದೆಂದೂ ಹೇಳುತಲೇ ಇರುವರು " ಅಪ್ಪಾ/ಅಮ್ಮಾ ನನ್ನ ಅಸ್ತಿತ್ವವ ಉಳಿಸಿ ಕಳಿಸಿಕೊಡಿ , ಹೆತ್ತ ತಪ್ಪಿಗೆ ಮಾತ್ರ ಹೊರತಳ್ಳದಿರಿ ".

 ಇನ್ನೊಂದು ವಿಷಯ ಈ ಕಥೆ, ಈ ಸಮಸ್ಯೆ ಮದುವೆಯಾದೊಡನೆ ಇಲ್ಲಿಗೆ ನಿಲ್ಲುವುದೇ ? 
ಅಥವಾ ಮುಂದುವರಿಯುವುದೇ ? ಯೋಚಿಸಿ ಉತ್ತರ ಹೇಳಿ. ನಿಮ್ಮ ಉತ್ತರಕ್ಕಾಗಿ ನಾ ಕಾಯುತಲಿರುವೆ.  











Friday, June 17, 2011

5 Easy Steps to make Envelope

Step 1

Step2

Step3

Step4

Step5   




Wednesday, June 8, 2011

ಹಾಲಿನಂತ ಮನಸು

ಒಮ್ಮೆ ಒಡೆದು ಹೋದರೆ ಈ ಮನಸು ಹಾಲಿನಂತೆ,
ಕೂಡದು ಅದು ಎಂದಿಗೂ ಸೀಳಿದ ಕನ್ನಡಿಯಂತೆ ;
    ಹಾಲು- ಕನ್ನಡಿಯಾದರೋ ತರಬಹುದು ಇನ್ನೊಂದು,
               ಒಡೆದು ಹೋದ ಮನಸುಗಳು ಆಗಲಾರವು ಹತ್ತಿರ ಮತ್ತೆಂದು.

Friday, May 27, 2011

Grab the Opportunity




Opportunity is like a door to the "Success", the thing which matters is how many of us will make an attempt to knock the door or try to open that door and Some times these opportunities will be be just one step away to reach our hand and will be waiting to show the way to reach our goal in one or the other ways. You may reach or you may not but.. ' grabbing Each and Every Opportunity and to make an 100% attempt to increase the chances of effectual is must ' .

As the famous writer Robin Sharma has said " Take more risks, because at the end of your life you will count the number of risks you have taken in your life than the safer steps". Don't worry about Success " It is a Journey not a destiny" - Ben Sweetland. Success or Failure It depends on the person, because opposite values are complimentary it is left to us how we take it and how we can use that result as a stepping stone to our success.

So, now what are you waiting for ???? Say "YES" and Just grab the Opportunity, it may be waiting outside your door or may be in the window :) Just have a look around YOU, You may find it buddy. 

Wednesday, March 30, 2011

ಬಯಸದೇ ಬಂದ ಭಾಗ್ಯ


ಆ ದಿನ ಬೆಳಿಗ್ಗೆ ಎಂದಿನಂತೆ late ಆಗಿ  ಎದ್ದು ಕಣ್ಣು ತಿಕ್ಕುತ್ತಾ ಹೊರಗೆ ಸೋಫಾ ಮೇಲೆ ಬಂದು ಕುಳಿತು ಮತ್ತೊಂದು round ನಿದ್ದೆ ಮಾಡುವ plan ನಲ್ಲಿಯೇ ಇರುವಾಗ ಕಣ್ಣಿಗೆ ಒಂದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಕಂಡಿತು, ಏನಿದ್ಯಪ್ಪ ಈ ಬಾರಿ ವಿಶೇಷ, ಯಾರ್ಯಾರು ಬರ್ತಿದ್ದಾರೆ ನೋಡ್ವಾ ಅಂತ ಓದುತ್ತಾ ಹೋದೆ ನೋಡಿ ಅಲ್ಲಿರುವ ಹೆಸರಿನ ಪಟ್ಟಿ ಕಂಡು ನನ್ನ ಇರೋಬರೋ ನಿದ್ದೆಯೆಲ್ಲಾ .... ಓಡಿ ಹೋಯಿತು, ನನ್ನ ಹೆಸರೂ ಇತ್ತು ಅಂತ separate ಆಗ್ ಬೇರೆ ಹೇಳಬೇಕಾ ಸ್ವಾಮಿ ಇಲ್ಲಾತಾನೆ !!!!
ಇಂಗು ತಿಂದ ಮಂಗನಂತಾಗಿತ್ತು ನನ್ನ ಕಥೆ. ಅದೇನು ಮಾಮೂಲಿ ಕಾರ್ಯಕ್ರಮವೇ ಆಯ್ತಪ್ಪ ಕೂತು ಬರೋಣ ಅನ್ಲಿಕ್ಕೆ ?

" ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ " ಅದರಲ್ಲಿ ಬರೋ ಚುಟುಕು ಗೋಷ್ಠಿಯ ಪಟ್ಟಿಯಲ್ಲಿ ನನ್ನ ಹೆಸರೂ ಇತ್ತು. ನಾ ಎಲ್ಲಿ ಅದು ಎಲ್ಲಿ. ನನಗೆ ಕೇಳದೆ ಹೇಗ್ ಹಾಕಿದ್ರಿ ಹೆಸರು ಅಂತ ಕೇಳಿದ್ರೆ ಏನೋ ನಮ್ಮ ಹುಡುಗಿ ಅಂತ , ಅಪ್ಪಗ್ ಬಂದು ಕೇಳಿ ಹಾಗೆ ಹಾಕ್ಬಿಟ್ಟೇ ಅಂತ ಅವ್ರು ಅಂದರೆ ಈಚೆ ಅಪ್ಪ ವ್ಹಾ! ನನ್ನ ಮಗಳಿಗೂ chance ಸಿಗ್ತಲ್ಲಾ ಅಂತ ಹೂ ಅಂದೇ ಅಂದರು. ಒಟ್ಟಿನಲ್ಲಿ ಆಗಿದ್ದ್ ಇಷ್ಟೇ ನನ್ನ ತಂದೆ ವೃತ್ತಿಯಲ್ಲಿ ವೈದ್ಯರಷ್ಟೇ ಅಲ್ಲಾ ಬರಹಗಾರರು ಕೂಡ, ಹಿಂದೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿದ್ದರು ಹಾಗೂ ಆ ಬಾರಿ ನಮ್ಮ college ನ lecturer ರೇ  ಅಧ್ಯಕ್ಷರಾಗಿದ್ದರು ಸಾಲದೆಂಬಂತೆ ತಂದೆಗೆ ತುಂಬಾ ಪರಿಚಯ, ಅಪ್ಪ ಹೇಳದಿದ್ದರು ಅದು ಹೇಗೋ ಆಗಿ ನನ್ನ ಹೆಸರೊಂದು print ಆಗಿ ಎಲ್ಲಾ ಕಡೆ ಹಂಚಿ ಅಂತು ಕಾರ್ಯಕ್ರಮಕ್ಕೆ ಎರಡು ದಿನ ಇರೋವಾಗ ನನಗೆ ವಿಷಯ ಬಂದು ತಲುಪಿದ್ದು ನಿಜಕ್ಕೂ ನನ್ನ ಪೂರ್ವ ಜನ್ಮದ ಪುಣ್ಯ ಕಣ್ರೀ..

ಏನೋ ತಮಾಷೆಗೆ ಬಾಲಿಶವಾಗಿ ಬರಿಯುತ್ತಿದ್ದುದು ನಿಜ, ಆದರೆ ಹಾಗೆಂದು ಅದನ್ನೇ ಅಲ್ಲಿ ನೆರೆದಿರುವ ಸಾವಿರಾರು ಜನರ ಮುಂದೆ ಹೇಳಲಾದೀತೆ !!!! ಬೆಕ್ಕಿಗೆ ಚೆಲ್ಲಾಟ - ಇಲಿಗೆ ಪ್ರಾಣ ಸಂಕಟ. ವಾದ ಮಾಡ ಹೋದರೆ ನನ್ನ ಮಕ್ಕಳಿಗೆ ತಮ್ಮ ಮೇಲೆ confidence ಇಲ್ಲದೆ  ಗಂಟು ಹೋಯಿತು ಎನ್ನುವ comment ಬೇರೆ. ಕೊನೆಗೆ ಬೇರೆ ದಾರಿ ಇಲ್ಲದೇ ..  "ಆಯ್ತು ಈಗ ನೀನೆ ಹೇಳಿಕೊಡು ನನಗೆ ಗೊತ್ತಿಲ್ಲಾ " ಅಂತ ಕೂತೆ. ಜಪ್ಪಯ್ಯ ಅಂದ್ರು ಕೇಳಲಿಲ್ಲಾ ಅಂತು ನಾನೇ ಹಾಗೂ ಹೀಗೂ .. 
ಅಂತೂ ಇಂತೂ  ಹಿಂದಿನ ದಿನ ಬರೆದು ಮುಗಿಸಿ ಅಪ್ಪನಿಗೆ ತೋರಿಸಿದೆ ok ನು ಅಂದ್ರು ಬಿಡಿ. 

ಈಗ ಕೊನೆ.. ತಯಾರಿಗೆ  ಪುಣ್ಯ ಅಪ್ಪ ಸಹಾಯಕ್ಕೆ ಬಂದು ಹಾಗೆ discuss ಮಾಡ್ತಾ ಕೂತಾಗ ಯಾವುದೊ ಹಳೇ diary ಯಲ್ಲಿ ಇದ್ದ ಒಂದು ತುಂಡು ಕಾಗದದ ಮೇಲಿನ ಒಂದೇ ಒಂದು line ನನ್ನ life ನ story ಗೆ जबरदस्त तड़का ಹಾಕಿತು. ಆ line ಹೀಗಿದೆ " ಇಲಿ ಬೆಕ್ಕ ನೋಡಿ ನಕ್ಕರೆ ಪಕ್ಕದಲ್ಲೇ ಒಂದು ಬಿಲವಿದೆ ಎಂದರ್ಥ " ಇದೊಂದು ಗಾದೆ ಮಾತು. ಆಗ ಅಪ್ಪ ತಟ್ಟನೆ ಏನೋ ಹೇಳಿದರು ಎಲ್ಲರಿಗೂ ಹಿಡಿಸಿತು ಅದನ್ನೇ ಚುಟುಕು ಮಾಡಿ ಹೇಳೊದು ಅಂತ ನಿರ್ಧಾರವಾಯಿತು. ಈಗ ಹೇಗೆ start ಮಾಡಬೇಕು.. ಹೇಗೆ ಹೇಳಬೇಕು.. ಹೇಗೆ end ಮಾಡಬೇಕು ಅಂತ ಹೇಳಿಕೊಟ್ಟರು. ಆ ನಂತರ ಹೇಳಿದ್ದೆ ಹೇಳಿದ್ದು ಕನ್ನಡಿ ಮುಂದೆ, ಮನೆಯವರ ಮುಂದೆಲ್ಲಾ practice ಮಾಡಿದ್ದೇ ಮಾಡಿದ್ದು. ರಾತ್ರಿ ಹಗಲೆಲ್ಲಾ ಈ ಕಾರ್ಯಕ್ರಮವೇ ಸಿಂಹ ಸ್ವಪ್ನವಾಗಿ  .. ಬೇತಾಳ ನಂತೆ .. ನಕ್ಷತ್ರಿಕ  ( ಯಾವುದಾದರು ಆಯ್ಕೆ ಮಾಡಿಕೊಳ್ಳಿ ಆದರೆ ಅದರ ಜೊತೆ ನನ್ನ ಪರಿಸ್ಥಿತಿ ಬಗ್ಗೆ ಕೂಡ ಸ್ವಲ್ಪ ಮರುಕ ಪಡ್ರೀ ... ) ನಂತೆ ಕಾಡಿತು. 

........................  ಈಗ Final Match. ಆ ದಿನ ಜನವರಿ ೨೩, ೨೦೦೬ ಮಹಾನ್ ದೇಶಭಕ್ತರಾದ ಸುಭಾಷ್ ಚಂದ್ರ ಬೋಸ್ ರವರ ಜನ್ಮ ದಿನ. ಸಾವಿರಾರು ಜನ ಕೂತಿದ್ದಾರೆ, ನಮ್ಮ ಗೋಷ್ಟಿಯ ಸಮಯ ; ನನ್ನ ಹೆಸರು ಹೇಳಲಿಕ್ಕೂ ನಾ ನಲ್ಲಿ ತಲುಪುವದಕ್ಕೂ ಸರಿಯಾಗಿ, ನಾ ಮುಂದೆ ಹೋಗುವಾಗ ಅಲ್ಲಿ ಅರ್ಧಕ್ಕೆ ಅರ್ಧ ಜನ ಪರಿಚಯದವರು. ಅವರೆಲ್ಲರ face reading ಮಾಡೋಕ್ಕೆ ನಾ ಹೋಗಲಿಲ್ಲಾ ಕಣ್ರೀ ಯಾಕಂದ್ರೆ ಆಗ ನನ್ನ ಹೃದಯಾನೇ ನನ್ನ ಬಾಯಿಗೆ ಬರೋ ಸ್ಥಿತಿಗೆ  ಬಂದಿತ್ತು.
ಎಲ್ಲರ  ಸರದಿಯೂ ಮುಗಿಯುತ್ತಾ ಜನ ಮಧ್ಯದಲ್ಲಿ ನಿದ್ರಾದೇವಿಯನ್ನು ಅಪ್ಪಿಕೊಂಡು ಬರುತ್ತಾ, ಗಲಾಟೆ ಮಾಡುತ್ತಾ ಕುಳಿತಾಗ  ನನ್ನ ಸರದಿ ಬಂದಿತು.  

"ದೇವ್ರೇ ಜನ ನಿದ್ದೇ ಮಾಡಿದ್ರೂ ಪರ್ವಾಗಿಲ್ಲಾ ಆದ್ರೆ ಗಲಾಟೆ ಮಾಡದೆ ಇರೋ ಹಾಗೆ ನೋಡ್ಕೊಳಪ್ಪಾ ಶಿವನೇ ssss " ಅಂತೆಲ್ಲಾ ಬೇಡಿ Podium ಮುಂದೆ ಒಂದು ಕ್ಷಣ ನಿಂತೆ.  ಅಪ್ಪ ಹೇಳಿದಂತೆ " ಇಂದು ನಿಮಗೆಲ್ಲಾ ತಿಳಿದಿರುವಂತೆ ಬೋಸ್ ರವರ ಜನ್ಮ ದಿನ. ಅವರ ಜನ್ಮ ದಿನಕ್ಕೆ ಈ ನನ್ನ ಚುಟುಕಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಿದ್ದೇನೆ " ಎಂದು ಹೇಳಿ ಆರಂಭಿಸಿದ್ದೇ ತಡ "Oh.. My God ..... still I can't believe "  ಎಲ್ಲವೂ ಸ್ತಬ್ಧ. ಕೊನೆಗೆಂದು ತೆಗೆದಿಟ್ಟ  ನನ್ನ master piece ಚುಟುಕನ್ನು gesture, posture ಗಳನ್ನೆಲ್ಲಾ ಸಯ್ಯೋಜಿಸಿ ಸರಿಯಾದ expression ನೊಂದಿಗೆ ನಟಿಸುತ್ತಾ ಹೇಳಿ ಮುಗಿಸಿ ತಿರುಗುವಾಗ ನನ್ನ performance ಬಗ್ಗೆ ನಾ ಏನು ಹೇಳಬೇಕಾಗಿ ಉಳಿದಿರಲಿಲ್ಲಾ friends.. ಕಿವಿ ಮುಚ್ಚುವಂತೆ ಮಾಡಿದ ಆ ಚಪ್ಪಾಳೆಯ ಸದ್ದೇ ಎಲ್ಲವನ್ನೂ ಹೇಳಿ ಮುಗಿಸಿತ್ತು ; ನನ್ನ ತಂದೆ ಹಾಗೂ ನನ್ನ ಹೆಸರು ಹಾಕಿದ ಆ ನನ್ನ ಗುರುವಿನ ಮುಖದಲ್ಲಿ ಸಾರ್ಥಕತೆಯನ್ನು ಮೂಡಿಸಿತ್ತು.